ರಾಮಕ್ಷತ್ರಿಯರ ಗುರುಗಳು

ರಾಮಕ್ಷತ್ರಿಯರು ಮೂಲತಃ ಕವಳೆ ಮಠದ ಶಿಷ್ಯವರ್ಗದವರಾಗಿದ್ದು, ಕರ್ನಾಟಕಕ್ಕೆ ವಲಸೆ ಬಂದ ನಂತರ ಕ್ರಿ.ಶ17ನೇ ಶತಮಾನದಲ್ಲಿ ಶೃಂಗೇರಿ ಮಠ ಶಿಷ್ಯರಾಗುತ್ತಾರೆ. ನಂತರ 1861ರಲ್ಲಿ ಸ್ವರ್ಣವಲ್ಲಿ ಮಠಕ್ಕೂ ಶಿಷ್ಯರಾಗುತ್ತಾರೆ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಂ ಶೃಂಗೇರಿಯ ಪರಮಪೂಜ್ಯ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಯವರು, ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಮದ್‌ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಮರಕಠ ಶ್ರೀ ಗುರು ಪರಾಶಕ್ತಿ ಮಠದ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ.

ರಾಮಕ್ಷತ್ರಿಯ ಸಮಾಜ

ಶ್ರದ್ಧಾಭಕ್ತಿಯಿಂದ ಪೂಜಿಸಲ್ಪಡುವ ಪ್ರಸಿದ್ಧ ರಾಮನ ಕುಲದವರೇ ರಾಮಕ್ಷತ್ರಿಯರು ಎಂಬ ಮಾತಿದೆ. ಗೋವಾದಿಂದ ವಲಸೆ ಬಂದವರು, ವಿಜಯನಗರ ಸಾಮ್ರಾಜ್ಯದಲ್ಲಿ ಕ್ಷತ್ರಿಯರಾಗಿ ಸೇವೆ ಸಲ್ಲಿಸಿದವರು ಎಂಬೆಲ್ಲಾ ಅಂಶಗಳು ಇತಿಹಾಸದ ಪುಟದಲ್ಲಿ ದಾಖಲಾಗಿದೆ.

Read more
ವಿಶ್ವ ರಾಮಕ್ಷತ್ರಿಯ ಮಹಾಸಂಘ ರಿ.

1995ರಲ್ಲಿ ಆರಂಭಗೊಂಡ ವಿಶ್ವ ರಾಮಕ್ಷತ್ರಿಯ ಮಹಾಸಂಘವು ಪ್ರಪಂಚದಾದ್ಯಂತ ನೆಲೆಸಿರುವ ರಾಮಕ್ಷತ್ರಿಯ ಸಮಾಜ ಭಾಂದವರನ್ನು ಸಂಘಟನೆ, ರಾಮಕ್ಷತ್ರಿಯ ಸಂಘಗಳ ಬಲವರ್ಧನೆ ಹಾಗೂ ಸಮುದಾಯದ ಏಳಿಗೆಗೆ ಶ್ರಮಿಸುತ್ತಿದೆ.

Read more
ರಾಮಕ್ಷತ್ರಿಯ ಸಂಘ - ಸಂಸ್ಥೆಗಳು

ದೇಶ, ವಿದೇಶಗಳಲ್ಲಿ ನೆಲೆಸಿರುವ ರಾಮಕ್ಷತ್ರಿಯ ಬಂಧುಗಳು ಕಳೆದ ಹತ್ತಾರು ವರ್ಷಗಳಿಂದ ರಾಮಕ್ಷತ್ರಿಯ ಸಂಘ – ಸಂಸ್ಥೆಗಳ ಸಕ್ರಿಯವಾಗಿ ಸಮುದಾಯದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

read more

ವಿಶ್ವ ರಾಮಕ್ಷತ್ರಿಯ ಮಹಾಸಂಘದ ಸದಸ್ಯರಾಗಬೇಕೆ?

ಸಂಘಟನಾ ಪಥ

ಗುರಿ

ವಿಶ್ವದಾದ್ಯಂತ ಇರುವ  ರಾಮಕ್ಷತ್ರಿಯ ಸಂಘ ಸಂಸ್ಥೆಗಳ ಮೂಲಕ ರಾಮಕ್ಷತ್ರಿಯ ಸಮುದಾಯವನ್ನು ಸಂಘಟಿಸುವುದು

ಉದ್ದೇಶ

ರಾಮಕ್ಷತ್ರಿಯ ಸಮುದಾಯ ಸಂಘಟನೆ, ಸಮುದಾಯದ ಅಭಿವೃದ್ಧಿ, ಸಮುದಾಯದ ಪ್ರಾತಿನಿಧ್ಯ ವಹಿಸುವುದು

ಯೋಜನೆ

ರಾಮಕ್ಷತ್ರಿಯ ಸಮುದಾಯದವರಿಗೆ ಶಿಕ್ಷಣ ಸಂಸ್ಥೆ,  ಆರೋಗ್ಯ ಕೇಂದ್ರ ಸ್ಥಾಪನೆ ಹಾಗೂ ಆರ್ಥಿಕ ಬಲವರ್ಧನೆ, ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವುದು

ಕಾರ್ಯಕಾರಿ ಸಮಿತಿ

ಸಶಕ್ತ ಸಮಾಜದ ನಿರ್ಮಾಣಕ್ಕಾಗಿ ಒಗ್ಗಟ್ಟಿನಿಂದ ಮುನ್ನಡೆಯೋಣ.
ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಸಂಘಟನೆಯನ್ನು ಬಲಪಡಿಸೋಣ

ಕಾರ್ಯಕ್ರಮಗಳು

ಸಂಪರ್ಕಿಸಿ

ರಾಮಕ್ಷತ್ರಿಯ ಸಂಘ-ಸಂಸ್ಥೆ, ಸಂಘಟನೆ, ಸದಸ್ಯತ್ವ ನೊಂದಣಿ ಸೇರಿದಂತೆ ಯಾವುದೇ ಸಲಹೆ ಸೂಚನೆಗಳಿದ್ದಲ್ಲಿ ಸಂಪರ್ಕಿಸಿ